ಮನಸುಗಳ ಮಾತು ಮಧುರ..!!
ಮನಸಿನ ಪುಟದಲಿ ಮೂಡಿದ ಚಿತ್ತಾರಗಳ ಅನಾವರಣ....
Tuesday, March 10, 2015
ಕೇರಳದಲ್ಲಿ ಒಂದು ದಿನ :
ಪತ್ನಿ ಹೇಳಿದಳು: ಸಂಜೆ ಹೊತ್ತು ಒಬ್ಬೋಬರೆ ತಿರುಗಾಡಬೇಡಿ, ಕಾಡು... ಹುಲಿಗಳ ಕಾಟ.!
ನಾನಂದೆ: ನಿನಗಿಂತ ಬೇರೆ ಹುಲಿ ಬೇಕಾ?
Sunday, June 15, 2014
ಊರು ನೀರಾಗಿದೆ
ಬಾಳು ಹಾಳಾಗಿದೆ
ಬಿತ್ತಿದ ಬೆಳೆ ಬಿದ್ದು
ಹೊಗಿವೆ
ಉತ್ತುವ ನೆಲ ಕೊಚ್ಚಿ
ಹೊಗಿದೆ
ರೈತ ಕರಳು ಕಿತ್ತು
ಬಂದಿದೆ
ಕಣ್ಣೀರು ರಕ್ತವಾಗಿ ಹರಿದಿದೆ
ಮನೆ ಮಠಗಳು ಕುಸಿದಿವೆ
ದನ-ಕರು-ಕುರಿಗಳು
ಸತ್ತಿವೆ
ಸಂಸಾರಗಳು ಬೀದಿ ಪಾಲಾಗಿವೆ
ಜನಗಳ ಬದುಕು ಬರಡಾಗಿದೆ
ಕನಸುಗಳು ಕರಿಗಿವೆ
ಮನಸ್ಸುಗಳು ಮುರಿದಿವೆ
ಭಾವನೆಗಳು ಬತ್ತಿವೆ
ಆಸೆಗಳು ಕಮರಿ ಹೊಗಿವೆ
ಕತ್ತಲೆಯ ತೂರಿ ಬೆಳಕು
ಹರಿವಂತೆ
ಬಾಳ ಬಂಜೆತನ ನೀಗಿ,
ಜೀವನ
ಉತ್ಸಾಹ ಚಿಮ್ಮಿಸಲು, ಒಲವುಗಳು
ಕಾದಿವೆ ಧನ-ಧಾನ್ಯ-ಸೂರಿನಾಸರೆಗಾಗಿ
ಇಂದಿನ ಉಳಿವಿಗಾಗಿ ನಾಳೆಯ
ಭರವಸೆಗಾಗಿ.
--ರವಿ ಕುಲಕರ್ಣಿ, ಹುಬ್ಬಳ್ಳಿ.
Sunday, December 29, 2013
ಮಳೆ ನಿಲ್ಲುವವರೆಗೆ..
"ರಂಗ ಶಂಕರ"ದಲ್ಲಿ ನಾಟಕವನ್ನು ನೋಡಬೇಕೆಂಬ
ಬಯಕೆಗೆ ಸಮಯ ಕೂಡಿ ಬಂದಿದ್ದು
ಮೊನ್ನೆ ಶುಕ್ರವಾರ ೨೭ನೇ ತಾರೀಕಿನಂದು. ಅವತ್ತು
ಪ್ರದರ್ಶಿಸಲ್ಪಡುತ್ತಿದ್ದ ನಾಟಕ- "ಮಳೆ ನಿಲ್ಲುವವರೆಗೆ". ಸ್ನೇಹಿತರೊಡನೆ
ಈ ನಾಟಕ ನೋಡಬೇಕೆಂದು
ಮೊದಲೇ ನಿರ್ಧರಿಸಿ, ಟಿಕೆಟ್ನ್ನು ಬುಕ್
ಮಾಡಿದ್ದೆ. ಅಂತೂ ಅವತ್ತು ಕೆಲಸದಿಂದ
ಚೂರು ಬೇಗನೆ ಬಂದು ರಂಗ
ಶಂಕರ ತಲುಪಿದಾಗ ಏನೊ ಸಮಾಧಾನ & ಖುಷಿ.
ನಿರ್ದೇಶನ:
ಡಾ. ಬಿ ವಿ ರಾಜಾರಾಂ
ರಚನೆ: ಎಲ್.
ಎಸ್. ಸುಧೀಂದ್ರ
ಅಭಿನಯ:
ಬಿ ಸುರೇಶ್, ಮಂಜುನಾಥ ಹೆಗಡೆ,
ರವೀಂದ್ರ, ಮತ್ತಿತರರು.
ಹೆಸರೇ
ಸೂಚಿಸುವ ಹಾಗೆ, ಮಳೆ ನಿಲ್ಲುವತನಕ
ಒಂದು ಮನೆಯಲ್ಲಿಯ ೫ ಜನರು ಮಾಡುವ
ಮನೋರಂಜನಾ ಪ್ರಹಸನ. ಒಬ್ಬ ನಿವೃತ್ತ
ನ್ಯಾಯಾಧೀಶ ಹಾಗೂ ಇಬ್ಬರು ನಿವೃತ್ತ
ನ್ಯಾಯವಾದಿ ಸ್ನೇಹಿತರು ಕಾಲಹರಣೆಗಾಗಿ ಬೆಟ್ಟದ ಮೇಲಿರುವ ನ್ಯಾಯಾಧೀಶನ
ಮನೆಯಲ್ಲಿ ಸೇರುವುದು ಗುಂಡು ಹಾಕುವುದು, ಮಾತು-ಕಥೆಯಾಡುವುದು
& ಹರಟೆಗಾಗಿ
"ನ್ಯಾಯಾಲದ ಆಟ "ವಾಡುವುದು ರೂಢಿ. ಹಾಗೆ ಮನೆಗೆ
ಯಾರಾದರೂ ಬಂದರೆ ಅವರನ್ನು ಆಟಕ್ಕೆ
ಆಹ್ವಾನಿಸಿ, ಸೇರಿಸಿಕೊಂಡು ಆಟ ಆಡುವುದು ಅವರ
ವಾಡಿಕೆ.
ಒಂದು
ದಿನ ಜೋರಾಗಿ ಮಳೆ ಬರುವ
ಸಮಯದಲ್ಲಿ ಇದೆ ರೀತಿ ಮಾತಾಡುತ್ತಾ,
ಗುಂಡು ಹಾಕುತ್ತಿದ್ದಾಗ, ಆಕಸ್ಮಾತ್ ಕಾರು ಕೆಟ್ಟುಹೋಗಿ, ಮನೆ
ದೀಪ ಉರಿಯುವದನ್ನು ಕಂಡು ಆನಂದ ಎಂಬ
ಸೇಲ್ಸ್ಮನ್ ಮನೆಗೆ ಬರುತ್ತಾನೆ.
ಅವನನ್ನು ಉಪಚರಿಸಿ, ಆಟಕ್ಕೆ ಕರೆಯುತ್ತಾರೆ. ಆನಂದ
ಕೂಡ ಒಪ್ಪಿ ಆಟವಾಡಲು ಅಣಿಯಾಗುವನು.
ಆನಂದನನ್ನು ಅಪರಾಧಿಯಾಗಿಸಿ ಅವನ ಪರ & ವಿರೋಧವಾಗಿ
ಒಬ್ಬಬ್ಬ ನ್ಯಾಯವಾದಿ ಗುರುತಿಸಿ ಆಟ
ಆರಂಭಿಸುವರು.
ಆನಂದನ ವಿಚಾರಣೆ ನಡೆಸುವ ರಾಮಣ್ಣ
ಅವನ ವೈಯಕ್ತಿಕ ಹಾಗೂ ವೃತ್ತಿ ಹಿನ್ನಲೆಯನ್ನು
ಕೆದಕುತ್ತಾ ಸಾಗುವನು, ಆನಂದನು ಕೂಡ ತಾನೇನು
ಕಮ್ಮಿ ಎನ್ನುವಂತೆ ರಾಮಣ್ಣನ ಪ್ರಶ್ನೆಗಳನ್ನು ವಿಶ್ವಾಸದಿಂದ
ಗುಂಡಿನ ಮತ್ತಿನಲ್ಲಿಯೇ ಎದರಿಸುವನು. ವಕೀಲ ರಾಮಣ್ಣ ಚಾಣಾಕ್ಷತೆಯಿಂದ
ಆನಂದನ ಹುಳುಕನ್ನು ಅವನಿಗೆ ಅರಿವಿಲ್ಲದಂತೆಯೇ ಹೊರಹಾಕಿಸುವನು. ಆನಂದನು ಕೊನೆಗೆ ತನ್ನ ಅಪರಾಧವನ್ನು
ಒಪ್ಪಿಕೊಂಡು, ಆಟದ ಸ್ವರೂಪವನ್ನು ನೋಡಿ,
ನಿಜ ಜೀವನ & ಆಟವನ್ನು ಬೆರಿಸಿ ಹೆದರಿ,
ಆಟದ ಗೊಡವೆ ಸಾಕೆಂದು, ಮಳೆ
ನಿಂತಿರುವುದನ್ನು ತಿಳಿದು ಓಡಿ ಹೋಗುತ್ತಾನೆ. ಆನಂದ ಹೋದ ಸ್ವಲ್ಪ
ಸಮಯದಲ್ಲೇ, ಮತ್ತೆ ಮಳೆ ಬೀಳಲಾರಂಭಿಸುತ್ತದೆ.
ಅದೇ ಸಮಯಕ್ಕೆ ಆನಂದನ ಹೆಂಡತಿಯು
ಅವರ ಮನೆಗೆ ಬರುತ್ತಾಳೆ. ಈ
ನ್ಯಾಯವಾದಿಗಳು ಮತ್ತೊಮ್ಮೆ ಆಟವಾಡಲು ಸಿದ್ದರಾಗುತ್ತಾರೆ.
ಆನಂದಾಗಿ
ಮಂಜುನಾಥ ಹೆಗಡೆ ಮತ್ತು ವಕೀಲ
ರಾಮಣ್ಣನಾಗಿ ಬಿ ಸುರೇಶ್ ಗಮನ
ಸೆಳೆಯುತ್ತಾರೆ. ಅವರ ಹಾವ-ಭಾವ,
ಮಾತು, ನಟನೆ ಮನೆಗೆ ಬಂದ
ಮೇಲೂ ನನ್ನು ಕಾಡುತಿತ್ತು. ಉಳಿದ
ಪಾತ್ರಧಾರಿಗಳು ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ.
ನಾಟಕ ಸಾಗುತಿದ್ದಂತೆಯೇ ಅವರ ಈ ಆಟ
ನಿಜವೆನ್ನಿಸುವ ಮಟ್ಟಿಗೆ ವೀಕ್ಷಕರನ್ನು ಗೊಂದಲಕ್ಕೆ
ಸಿಕ್ಕಿಸುವುದು. ಮಿತ ಹಾಸ್ಯ ಹಿತವಾಗಿದೆ.
ಮಳೆಯ
ಬರುವುದನ್ನು ತಿಳಿಸುವ ಹಿನ್ನಲೆ ಧ್ವನಿ-ಬೆಳಕು ಇನ್ನೂ ಚೆನ್ನಾಗಿದಿದ್ದರೆ
ನಾಟಕ ಇನ್ನಷ್ಟು ಪ್ರಭಾವಿಯಾಗುತಿತ್ತೇನೋ??
ನೋಡಿ,
ಈ ಆಟವನ್ನು.
ಖಂಡಿತ
'ಮಳೆ ನಿಲ್ಲುವವರೆಗೆ; ಪ್ರಯೋಗ ನಿಮ್ಮನ್ನು ಮನರಂಜಿಸುತ್ತದೆ.
Friday, November 1, 2013
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...!!
ಪ್ರೀತಿಯ
ಹಂದರ,
ಸ್ನೇಹದ
ಕಡಲು,
ವಿಶ್ವಾಸದ ಒಡಲು,
ಸಹೋದರತೆಯ ಚಿಲುಮೆ,
ಸಹನೆಯ ಒಲುಮೆ,
ಭಾವಗಳ ಬುಗ್ಗೆ,
ಕಲೆಯ ಸಾಗರ,
ಪ್ರಕೃತಿಯ
ತವರು,
ಸಾಹಿತ್ಯದ
ತೇರು,
ಸಂಸ್ಕೃತಿಯ
ಬೀಡು,
ಅದುವೇ ನಮ್ಮ...
ಚೆಲುವ ಕನ್ನಡ ನಾಡು..!!
ಕನ್ನಡಕ್ಕಾಗಿ
ತನುವು, ಕನ್ನಡಕ್ಕಾಗಿ ಮನುವು...!!
ಕನ್ನಡ ಸಂಭ್ರಮಿಸಲಿ....!!
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...!!
Sunday, September 8, 2013
ಬದಲಾವಣೆಯ ತಂಗಾಳಿ ಬೇಕು ಬಾಳಿನಲ್ಲಿ
ಬದಲಾವಣೆ- ಜೀವನದ ಒಂದು ಸಾರ್ವತ್ರಿಕ, ಸಾರ್ವಕಾಲಿಕ, ಅವಶ್ಯಕ ಹಾಗೂ ಅನಿವಾರ್ಯ ಘಟ್ಟ. ದಿನಗಳು ಸವೆದಂತೆ ಕಾಲದ ಸಮಾನತೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ, ಪ್ರಾಣಿ, ವಸ್ತು ಮತ್ತು ಕ್ರಿಯೆಗಳ ಎಲ್ಲಾ ವಿಧದ ಮಹತ್ತರವಾದ ಹಾಗೂ ಅಗತ್ಯವಾದ ರೂಪಾಂತರ ಅಪೇಕ್ಷಣೀಯವಾದದು. ಪ್ರತಿಯೊಂದರ ಉಳಿವಿಗಾಗಿ ಮತ್ತು ಬೆಳವಣೆಗಾಗಿ ಬದಲಾವಣೆ ಹೊಂದುವುದು ಸ್ವಾಭಾವಿಕವಾದಂತಹ ಗುಣಧರ್ಮ. ಬದಲಾವಣೆ ಸರ್ವತೋಮುಖವಾಗಿರಬೇಕು ಹಾಗೂ ಸಮಾಜದ ಮತ್ತು ವೈಯಕ್ತಿಕ ಬದುಕಿನ ಅಭಿವೃದ್ಧಿ ಪರವಾಗಿರಬೇಕು. ಆರೋಗ್ಯಕರವಾದ, ಸ್ನೇಹಪರವಾದ ಬದಲಾವಣೆ ಜೀವನವನ್ನು ಪ್ರಗತಿ ಪಥದ ಶಿಖರವನ್ನೇರಲು ಪೂರಕವಾಗಿರುವಂತಿರಬೇಕು. ಜ್ಞಾನ ಭಂಡಾರ ಹಿಗ್ಗಿಸಲು, ಮನಸ್ಸಿನ ಅಂಧಕಾರ ತೊಲಗಿಸಲು, ವಿಶಾಲ ಮನೋಧರ್ಮ ಬೆಳೆಯಲು, ಸಂಸಾರ ನೌಕೆ ನಿರಾತಂಕವಾಗಿ ಮುಂದೆ ಸಾಗಲು, ಧನಾತ್ಮಕವಾದ ಬದಲಾವಣೆ ಕ್ರಿಯೆ ನಿರಂತರವಾಗಿ ನಡೆಯುತ್ತಿರಬೇಕು. ಬದುಕ ಸಾಗರದಲ್ಲಿ ಯಶಸ್ಸಿನ ದಡ ತಲುಪಲು ಬದಲಾವಣೆಯ ಸಿಹಿಯಾದ ತಂಗಾಳಿ ಬೀಸಬೇಕು.
-ರವಿ ಕುಲಕರ್ಣಿ, ಹುಬ್ಬಳ್ಳಿ.
Subscribe to:
Posts (Atom)

