ಊರು ನೀರಾಗಿದೆ
ಬಾಳು ಹಾಳಾಗಿದೆ
ಬಿತ್ತಿದ ಬೆಳೆ ಬಿದ್ದು
ಹೊಗಿವೆ
ಉತ್ತುವ ನೆಲ ಕೊಚ್ಚಿ
ಹೊಗಿದೆ
ರೈತ ಕರಳು ಕಿತ್ತು
ಬಂದಿದೆ
ಕಣ್ಣೀರು ರಕ್ತವಾಗಿ ಹರಿದಿದೆ
ಮನೆ ಮಠಗಳು ಕುಸಿದಿವೆ
ದನ-ಕರು-ಕುರಿಗಳು
ಸತ್ತಿವೆ
ಸಂಸಾರಗಳು ಬೀದಿ ಪಾಲಾಗಿವೆ
ಜನಗಳ ಬದುಕು ಬರಡಾಗಿದೆ
ಕನಸುಗಳು ಕರಿಗಿವೆ
ಮನಸ್ಸುಗಳು ಮುರಿದಿವೆ
ಭಾವನೆಗಳು ಬತ್ತಿವೆ
ಆಸೆಗಳು ಕಮರಿ ಹೊಗಿವೆ
ಕತ್ತಲೆಯ ತೂರಿ ಬೆಳಕು
ಹರಿವಂತೆ
ಬಾಳ ಬಂಜೆತನ ನೀಗಿ,
ಜೀವನ
ಉತ್ಸಾಹ ಚಿಮ್ಮಿಸಲು, ಒಲವುಗಳು
ಕಾದಿವೆ ಧನ-ಧಾನ್ಯ-ಸೂರಿನಾಸರೆಗಾಗಿ
ಇಂದಿನ ಉಳಿವಿಗಾಗಿ ನಾಳೆಯ
ಭರವಸೆಗಾಗಿ.
--ರವಿ ಕುಲಕರ್ಣಿ, ಹುಬ್ಬಳ್ಳಿ.
No comments:
Post a Comment